ಕರ್ನಾಟದ ನಿರುದ್ಯೋಗಿಗಳಿಗೆ ಸಹಾಯ ಧನ ನೀಡುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಯುವನಿಧಿ ಎಂಬ ಹೊಸ ಯೋಜನೆ ಒಂದನ್ನು ಜಾರಿಗೆ ತಂದಿದೆ , ಸರ್ಕಾರದ ಕೊನೆಯ ಗ್ಯಾರಂಟಿ ಯೋಜನೆಯದ ಇದನ್ನು ಜಾರಿಗೆ ತರಲು ಎಲ್ಲ ಸಿದ್ದತೆಗಳು ಆರಂಭ ಗೊಂಡಿದ್ದು , ನೀವು ಅರ್ಜಿಸಲ್ಲಿಸಲು ಅರ್ಹರಾಗಿದ್ದಲಿ ನಿಮಗೆ ಬೇಕಾದ ಉಪಯುಕ್ತ ಮಾಹಿತಿ ಇಲ್ಲಿವೆ .
2022-23 ರಲ್ಲಿ ತೇರ್ಗಡೆ ಆದಂತಹ ಪದವೀದರ ನಿರುದ್ಯೋಗಿ ಮತ್ತು ಡಿಪ್ಲೋಮಾ ನಿರುದ್ಯೋಗಿಗಳಿಗೆ ಸಹಾಯ ಧನ ನೀಡುವುದೆ ಈ ಯೋಜನೆಯ ಮುಖ್ಯ ಗುರಿಯಾಗಿದೆ .
ಕರ್ನಾಟಕ ಸರ್ಕಾರವು ನೀಡಿರುವ ಮಾಹಿತಿಯ ಪ್ರಕಾರ ದಿನಾಂಕ 21 - ಡಿಸೆಂಬರ್ - 2023 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ , ಸುಮಾರು 5 ಲಕ್ಷ ಆಭ್ಯರ್ಥಿಗಳು ಈ ಯೋಜನೆಯ ಸದುಪಯೋಗ ಪಡೆಯಲಿದ್ದಾರೆ ಎಂದು ಸರ್ಕಾರ ತಿಳಿಸಿದೆ
ಯುವನಿಧಿಗೆ ಅರ್ಜಿ ಸಲ್ಲಿಸಿದ ನಂತರ ಜನವರಿ ತಿಂಗಳಿನಿಂದಲೇ ಹಣ ಜಮೆ ಮಾಡುವ ಬರವಸೆಯನ್ನು ನೀಡಿದೆ .
- ಅರ್ಜಿ ಸ್ವೀಕಾರ ಆರಂಭ :- 21-12-2023
- ಅರ್ಜಿ ಸಲ್ಲಿಸುವ ವೆಬ್ಸೈಟ್ :- https://sevasindhu.karnataka.gov.in
- ಮೊದಲ ಹಣ ಜಮೆ ದಿನಾಂಕ :- ಜನವರಿ ತಿಂಗಳು
ಯುವ ನಿಧಿ ಜಮೆ ಮೊತ್ತ
- ಪದವೀದರರಿಗೆ :- 3000 ( ಪ್ರತಿ ತಿಂಗಳು )
- ಡಿಪ್ಲೋಮಾ ಪಾಸ್ ಆದವರಿಗೆ :- 1500 ( ಪ್ರತಿ ತಿಂಗಳು )
ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- sslc ಮಾರ್ಕ್ಸ್ ಕಾರ್ಡ್
- ಪದವಿ ಪಾಸ್ ಸರ್ಟಿಫಿಕೇಟ್
- ಪದವಿ ಮುಗಿದು 6 ತಿಂಗಳು ಕಳೆದರೂ ಉದೋಗ್ಯ ಪಡೆಯದ ಕುರಿತು ಸ್ವಯಂ ದೃಡೀಕರಣ ಅಥವಾ ನೋಟರಿ
ಅರ್ಜಿ ಸಲ್ಲಿಕೆ ಆರಂಭವಾದ ನಂತರ ನೀವು ಅರ್ಜಿ ಸಲ್ಲಿಸಲು ಯೋಗ್ಯರಾಗಿದಲ್ಲಿ ಮೇಲಿನ ದಾಖಲೆಗಳನ್ನು ಸಿದ್ಧಪಡಿಸಿ ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ ಮತ್ತು ಸಹಾಯಧನದ ಸದುಪಯೋಗ ಪಡೆದುಕೊಳ್ಳಿ .